ಅಂತದ್ದೇನಿಹುದು ಕಂಬನಿಯ ಹರಿಸಲು...
ಕಾಲವಿದು ಕೆಡುಕ ಮಾಡಿಲ್ಲ..!
ನಗು ನಗುತ ಬೀಳ್ಕೊಡುವುದೆ ಹಿತವು,
ಚಿಂತೆಗಳ ತಿರಸ್ಕರಿಸಿ, ಸುಖಸ್ಮರಣೆಯ ಸುಧಾರಿಸುತ,
ಮುಂದಕ್ಕೆ ನಡೆಯುವುದೇ ಜಗದ ವಿಧಿಯು...
ಇದು ಅಂತ್ಯವಲ್ಲ; ಶುಭಾರಂಭ...
ಇದು ಕೊನೆಯಲ್ಲ; ಹೊಸ ತೆನೆ...
ಕಣ್ಣಲ್ಲಿ ತೊರೆಯ ಕಟ್ಟದಿರಿ,
ಕಣ್ಣಂಚಿನ ಕೆರೆಯ ಮುಚ್ಚದಿರಿ...
ಕಂಬನಿಯು ಕೆರೆಯಲ್ಲಿ ಸೇರಿರಲಿ, ತುಳುಕುವುದೊಂದು ದಿನ...
ಆ ದಿನ ಸೇರಿರಲಿ ನಾವೆಲ್ಲ,
ಮತ್ತೊಮ್ಮೆ ನಗುಮೊಗದಿ...
ಬಿಸಿಲು ಮಳೆಯಂತೆ...
(೦೬/೧೦/೨೦೨೨)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ